Tuesday, May 04, 2010

ಇಂದು ಇಂದಿಗೆ...

ಇಂದು ಈಗಿನ ನಾನು
ಇರುವುದೇ ಹೀಗೆಂದು
ಒಪ್ಪಿಕೊಂಡರೆ ಸಾಲದೆ?
ನಿನ್ನೆಗಳ ಅಗೆಯಲೇ ಬೇಕೆ?

ತಿಳಿಯಲೇಬೇಕೆ? ಕೇಳು..
ಸತ್ತ ಪ್ರೀತಿಯ ಕೊಳೆತ
ಹೆಣಗಳೆ, ಬೆಳೆದು ಬಲಿತಿಹ
ನೀತಿಗಾಗಿದೆ ಗೊಬ್ಬರ

ತೆರೆಯ ಹಿಂದಿನ ಸತ್ಯ
ಝರಿಯ ಹಿಂದಿನ ಪಯಣ
ಅರಿವಿನಾಚೆಗೆ ಬಿಟ್ಟು
ಬರಿಯ ಹೃದಯದಿ ಪ್ರೀತಿಸು

ಕೈಯಲ್ಲಿ ಹಣ್ಣ ಹಿಡಿದು
ಗಿಡದ ಬುಡವನೇಕೆ ನೋಡುವೆ?
ಅಲ್ಲೇನಿದೆ ಬರೀ ಮಣ್ಣು!
ಕಣ್ಮುಚ್ಚಿ ನೀ ಹಣ್ಣ ತಿನ್ನು!

ನಿನ್ನ ಹೊಳೆವ ಕತ್ತಿಯಿಂದ
ಕೊಚ್ಚಿ ಎನ್ನ ಕೊಲ್ಲಬೇಡ
ಪ್ರೀತಿಯಿಂದ ಕಚ್ಚಿ ತಿನ್ನು
ಅಷ್ಟೆ ಸಾಕು ಹಣ್ಣಿಗೆ!
-೦-

15 comments:

sunaath said...

ವಾಹ್! ವಾಸ್ತವ ಹಾಗು ಆದರ್ಶಗಳ combination ಆಗಿರುವ ಸುಂದರ ಕವನ!

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

mastiddu dosta nirantara bareyuttiru

Sandeepa Nadahalli said...

@sunaath,
ಧನ್ಯವಾದಗಳು. :)

@ರಾಘು,
ಎಲ್ಲ ನಿಮ್ಮಂತವರ ಪ್ರೋತ್ಸಾಹ ದೋಸ್ತ! :)

ಸುಪ್ತದೀಪ್ತಿ suptadeepti said...

ಕಟುವಾಸ್ತವದ ಕವನ, ಸುಂದರವಾಗಿದೆ.

Niveditha said...

No words.. its not the poem, but the pain(i dont know if i can call it a pain) behind it thats giving me no words..

ಸಾಗರದಾಚೆಯ ಇಂಚರ said...

Nice poem

wordings are simply great

Krupesh said...

Simple yet elegant. Good work!

Krupesh

Sandeepa Nadahalli said...

@ಸುಪ್ತದೀಪ್ತಿ,
ಧನ್ಯವಾದಗಳು.

@Niveditha,
Chillax!! I understand..

@ಸಾಗರದಾಚೆಯ,
Thanks a lot!

@Krupesh,
Thanks much!

ಚಿತ್ರಾ said...

ಸಂದೀಪ,
ಚಂದವಾಗಿ ಮೂಡಿದೆ ಕವನ !
" ಇಂದು ಈಗಿನ ನಾನು
ಇರುವುದೇ ಹೀಗೆಂದು
ಒಪ್ಪಿಕೊಂಡರೆ ಸಾಲದೆ?
ನಿನ್ನೆಗಳ ಅಗೆಯಲೇ ಬೇಕೆ? "

ತುಂಬಾ ಅರ್ಥವತ್ತಾದ ಪ್ರಶ್ನೆ . ಇಷ್ಟವಾಯ್ತು .

Sandeepa Nadahalli said...

ಚಿತ್ರಾ,
ತುಂಬಾ ಧನ್ಯವಾದಗಳು. :-)

ಮನದಾಳದಿಂದ............ said...

ಅರ್ಥವತ್ತಾದ ಸಾಲುಗಳು.
ಸುಂದರ ಕವನ.

Sandeepa Nadahalli said...

@ಮನದಾಳದಿಂದ,
ಧನ್ಯವಾದಗಳು :-)

Vinay.S said...

ಸಂದೀಪ್,ತ ಉಂಬ ಚೆನ್ನಾಗಿ ಬರೆದಿದ್ದೀರ. 'ಕೈಯಲ್ಲಿ ಹಣ್ಣ ಹಿಡಿದು
ಗಿಡದ ಬುಡವನೇಕೆ ನೋಡುವೆ?" ತುಂಬಾ ಇಷ್ಟ ಆದ ಸಾಲುಗಳು. ಸುಂದರ ಪದ ಜೋಡಣೆ. ಶುಭವಾಗಲಿ.

-ವಿನಯ್

Enigma said...

wooow

Sandeepa Nadahalli said...

@Vinay.S,
ತುಂಬಾ ಧನ್ಯವಾದಗಳು :-)

@Enigma,
weee!! :)